`ಕಲಿಗಾಲ` ಹಾಡೊಂದೆ ಬಾಕಿ
Posted date: 22 Mon, Jul 2013 – 08:21:17 AM

ಓಂ ಸಾಯಿಪ್ರಕಾಷ್ ಅವರ 97ನೇ ಕನ್ನಡ ಸಿನೆಮಾ ‘ಕಲಿಗಾಲ’ ಮಾತಿನ ಭಾಗದ ಚಿತ್ರೀಕರಣ ಮುಗಿಸಿ ಒಂದು ಹಾಡನ್ನು ಇದೆ 25 ರಂದು ಚಿತ್ರೀಕರಣ ಮಾಡಿ 26 ರಂದು ಮಾತುಗಳ ಜೋಡಣೆಗೆ ಸಿದ್ದವಾಗಿದೆ. ಕಳೆದ ವಾರ ಸುರಿದ ಭಾರಿ ಮಳೆ ಇಂದ ಚಿತ್ರೀಕರಣ ಅಭಿಮನ್ ಸ್ಟುಡಿಯೋದಲ್ಲಿ ಸ್ಥಗಿತ ಆಗಿತ್ತು.
ಅಪರಾಧಕ್ಕೆ ತಕ್ಕ ಶಿಕ್ಷೆ  ಬೇಕು ಆಗಲು ಭಯ ಇರುವುದು. ಈ ಬಗ್ಗೆ ಯೋಚನೆ ಹರಿಸಿರುವ ಚಿತ್ರ ಈ ಕಲಿಗಾಲ. ತಪ್ಪು ಸಂಭವಿಸಿದರೆ ಅದಕ್ಕೆ ಶಿಕ್ಷೆ ಇಲ್ಲದೆ ಕಾನೂನಿನ ಶ್ರೀರಕ್ಷೆ ರಾಜಾರೋಷವಾಗಿ ಇರುವುದು ತಿಳಿದಿರುವ ವಿಚಾರ. ಅದನ್ನೇ ಚಿತ್ರದಲ್ಲಿ ಅಳವಡಿಸಿಕೊಳ್ಳುತ್ತಿದ್ದಾರೆ.
ಹಾಸ್ಯ ಚಿತ್ರಗಳು, ಮನೆಮಂದಿಯೆಲ್ಲಾ ಕುಳಿತು ನೋಡುವ ಚಿತ್ರಗಳಿಗೆ ಪ್ರಸಿದ್ದರಾದ ಸಾಯಿ ಪ್ರಕಾಷ್ ಅವರು ಹಿರಿಯ ಹಾಗೂ ಕಿರಿಯರ ಸಂಗಮದಿಂದ ಈ ಚಿತ್ರವನ್ನು ಈಗಾಗಲೇ ದ್ವಿತೀಯ ಹಂತಕ್ಕೆ ಮುನ್ನಡೆಸಿದ್ದಾರೆ.

ಸುಮನ್ ರಾಯ್ ಪ್ರೊಡಕ್ಷನ್ ಅಲ್ಲಿ ರಾಯಣ್ಣ ಅವರು ಈ ಚಿತ್ರದ ನಿರ್ಮಾಪಕರು. ಹೆಣ್ಣು ಮಕ್ಕಳ ರಕ್ಷಣೆ ಬಗ್ಗೆ ನಿರ್ದೇಶಕರು ಇಟ್ಟಿರುವ ಕಾಳಜಿ ಇಂದಿನ ಸಮಾಜದಲ್ಲಿ ಆಗಬೇಕು ಎನ್ನುತ್ತಾರೆ. ಈ ಚಿತ್ರದಲ್ಲಿ ಬರುವ ಸಂದೇಶ ಇಡೀ ಭಾರತ ದೇಶಕ್ಕೆ ಅನ್ವಯ ಎಂದು ಅವರು ಹೇಳುತ್ತಾರೆ.
ಲಾಟಿ ಹಿಡಿದು ಸಾಯಿಕುಮಾರ್, ಶ್ರೀ ನಿವಾಸಮೂರ್ತಿ, ರಮೇಶ್ ಭಟ್, ಎಂ ಎನ್ ಲಕ್ಷ್ಮೀದೇವಿ, ಅಕ್ಕಿಚನ್ನಬಸಪ್ಪ, ಪದ್ಮ ವಾಸಂತಿ, ಕ್ಷಮಾ, ರೂಪಿಕಾ, ಪಾವನಿ, ಆನಂದ್, ದರ್ಶನ್, ಸಂದೀಪ್ ಹಾಗೂ ಇನ್ನಿತರರು ಇದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed